ಔರಾದಕರ್ ವರದಿಯನ್ನು ರಾಜ್ಯ ಸರಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ, ಹಣಕಾಸು ಒದಗಿಸುವಿಕೆ ಕುರಿತಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳು ಸಭೆ ಕೈಗೊಂಡ ಬಳಿಕ ಅಧಿಕೃತವಾಗಿ ವರದಿ ಅನುಷ್ಠಾನಗೊಳ್ಳಲಿದೆ. ಆದರೆ, ಈ ವರದಿಯಲ್ಲಿ ಸಮಾನಾಂತರ ಹುದ್ದೆಯ ಸೃಷ್ಟಿಯ ಕುರಿತಾದ ಪ್ರಸ್ತಾಪ ಇದೆಯೇ ಹೊರತು; ವೇತನ ಪರಿಷ್ಕರಣೆಗೆ ಸಂಬಂಧಿಸಿದ ಯಾವುದೇ ಅಂಶಗಳು ಪ್ರಸ್ತಾಪಗೊಂಡಿಲ್ಲ ಎಂದು ಸಚಿವ ಪಾಟೀಲ್ ಸ್ಪಷ್ಟಪಡಿಸಿದರು.