ನಂಜನಗೂಡು: ಕಪಿಲಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು

ನಂಜನಗೂಡಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡಬೇಕೆಂಬ ಮೂವರು ಯುವಕರ ಯೋಜನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ನಂಜನಗೂಡಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡಬೇಕೆಂಬ ಮೂವರು ಯುವಕರ ಯೋಜನೆ ಕಪಿಲಾ ನದಿಯಲ್ಲಿ ಇಬ್ಬರ ಸಾವಿನಲ್ಲಿ ಅಂತ್ಯವಾದ ದಾರುಣ ಘಟನೆ ನಡೆದಿದೆ.

ಮೃತಪಟ್ಟವರನ್ನು ಬೆಂಗಳೂರಿನ ಸಿಗ್ಮಾ ಎಲೆಕ್ಟ್ರಾನಿಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಸ್ನೇಹಶೀಶ ಚಕ್ರವರ್ತಿ ಮತ್ತು ರಾಜೀವ್ ರಂಜನ್ ತಿವಾರಿ ಎಂದು ಗುರುತಿಸಲಾಗಿದೆ. ಚಕ್ರವರ್ತಿ ಪಶ್ಚಿಮ ಬಂಗಾಳದ ಮೂಲದವರಾಗಿದ್ದರೆ ತಿವಾರಿ ಉತ್ತರ ಪ್ರದೇಶದವರು.
ಮೈಸೂರಿನ ನಂಜನಗೂಡಿನ ಚಾಮಲಪುರದಹುಂಡಿಯಲ್ಲಿರುವ ತಮ್ಮ ಸ್ನೇಹಿತ ವಿನೋದ್ ನ ಮನೆಗೆ ಕಳೆದ ಸೋಮವಾರ ಸಂಜೆ ಇವರಿಬ್ಬರು ಹೋಗಿದ್ದರು. ಮೂವರು ನಿನ್ನೆ ಬೆಳಗ್ಗೆ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಹೋಗಲೆಂದು ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು.

ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ನದಿಗೆ ಇಳಿದವರು ನೀರಿನ ರಭಸವನ್ನು ತಾಳಲಾರದೆ ಒಬ್ಬರು ಕೊಚ್ಚಿ ಹೋದರು. ಮತ್ತಿಬ್ಬರು ಅವರ ರಕ್ಷಣೆಗೆ ಮುಂದಾದರು. ಅವರು ಸಹ ನೀರಿನಲ್ಲಿ ಅಲೆಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ವಿನೋದ್ ಜೋರಾಗಿ ಬೊಬ್ಬೆ ಹಾಕಿ ನದಿ ದಂಡೆಯಲ್ಲಿದ್ದವರಿಗೆ ಗೊತ್ತಾಗಿ ಅವರನ್ನು ನೀರಿನಿಂದ ಮೇಲಕ್ಕೆತ್ತಿದರು. ಆದರೆ ಚಕ್ರವರ್ತಿ ಮತ್ತು ತಿವಾರಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com