ಚಿತ್ರದುರ್ಗ ವಿಭಾಗದ ಶಿರಾ ಕೆಎಸ್ಆರ್ಟಿಸಿ ಡಿಪೋ ಬಸ್ ನಿರ್ವಾಹಕನಾಗಿರುವ ಶ್ರೀಧರ್ ಮಂಗಳವಾರಶಿರಾ-ಬೆಂಗಳೂರು -ಪಾವಗಡ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲುಪಿದಾಗ, ಅವರು ಬಸ್ಸಿನಲ್ಲಿ ವಾರಸುದಾರರಿಲ್ಲದ ಬ್ಯಾಗ್ ಒಂದನ್ನು ಪತ್ತೆ ಮಾಡಿದ್ದಾರೆ.ಆಗ ಅವರು ತಕ್ಷಣ ತನ್ನ ಡಿಪೋ ಮ್ಯಾನೇಜರ್ ಗೆ ವಿಚಾರ ತಿಳಿಸಿದ್ದ ಶ್ರೀಧರ್ ಡಿಪೋ ಮ್ಯಾನೇಜರ್ ಮುಖಾಂತರ ಆ ಬ್ಯಾಗ್ ಅನ್ನು ವಾರಸುದಾರೈಗೆ ಹಿಂತಿರುಗಿಸಿದ್ದಾರೆ.