ತುಮಕೂರು ಯೋಧನಿಗೆ ಗಣರಾಜ್ಯೋತ್ಸವ ಶೌರ್ಯ ಪ್ರಶಸ್ತಿ

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯಲ್ಲಿರುವ ತುಮಕೂರಿನ ನಾಯಕ್ ಎಂ. ಸಾದಿಕ್ 70ನೇ ಗಣರಾಜ್ಯೋತ್ಸವದಲ್ಲಿ ಶೌರ್ಯ ಪ್ರಶಸ್ತಿಗೆ ...
ನಾಯಕ್ ಎಂ. ಸಾದಿಕ್
ನಾಯಕ್ ಎಂ. ಸಾದಿಕ್
ತುಮಕೂರು: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯಲ್ಲಿರುವ ತುಮಕೂರಿನ ಎಂ. ಸಾದಿಕ್ 70ನೇ ಗಣರಾಜ್ಯೋತ್ಸವದಲ್ಲಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತುಮಕೂರಿನ ಪೂರ್​ಹೌಸ್ ಕಾಲೋನಿ ನಿವಾಸಿ ಎಂ. ಸಾದಿಕ್ 2004ರಲ್ಲಿ ಭಾರತೀಯ ಸೇನೆ ಸೇರಿದ್ದು, ಸದ್ಯ ಕಾಶ್ಮೀರದ ಕುಲ್ಗಾಮ್ಲ್ಲಿ ರಾಷ್ಟ್ರೀಯ ರೈಫಲ್ಸ್ 1ನೇ ಬೆಟಾಲಿಯನ್​ನಲ್ಲಿದ್ದಾರೆ.
ಸಾದಿಕ್ ತುರುವೇಕೆರೆ ತಾಲೂಕಿನ ಅಮ್ಮಸಂದ್ರದವರು. ತಂದೆ ದಿ.ಮೊಹಮ್ಮದ್ ಸಲೀಂ, ತಾಯಿ ಸಿರಾಜುನ್ನೀಸಾ. 10 ವರ್ಷಗಳ ಹಿಂದೆಯೇ ಕುಟುಂಬ ತುಮಕೂರಿಗೆ ಬಂದು ನೆಲೆಸಿದ್ದಾರೆ.
ಕಳೆದ ಅಕ್ಟೋಬರ್​ನಲ್ಲಿ ಮೂವರು ಉಗ್ರರ ಎನ್​ಕೌಂಟರ್ ಮಾಡಿದ್ದಕ್ಕೆ ಸಾದಿಕ್ ಶೌರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಎನ್​ಎಸ್​ಜಿ ಪಡೆ, ದಕ್ಷಿಣಾ ಆಫ್ರಿಕಾದ ಸೂಡಾನ್​ಗೆ ತೆರಳಿದ್ದ ವಿಶ್ವಸಂಸ್ಥೆ ಶಾಂತಿ ಸೇನೆಯಲ್ಲೂ ಸಾದಿಕ್ ಇದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com