ಭಾನುವಾರ ಸಿದ್ಧಾರ್ಥ್ ಕರೆ ಮಾಡಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ: ಡಿಕೆಶಿ ಟ್ವೀಟ್

ಭಾನುವಾರ ಸಿದ್ದಾರ್ಥ್ ನನಗೆ ಕರೆ ಮಾಡಿ ಅರ್ಜೆಂಟ್ ಆಗಿ ಮಾತನಾಡಬೇಕು ಎಂದು ಹೇಳಿದ್ದರು, ಅವರು ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ, ...
ಡಿಕೆ ಶಿವಕುಮಾರ್ ಮತ್ತು ಸಿದ್ದಾರ್ಥ್
ಡಿಕೆ ಶಿವಕುಮಾರ್ ಮತ್ತು ಸಿದ್ದಾರ್ಥ್
ಬೆಂಗಳೂರು: ಭಾನುವಾರ ಸಿದ್ದಾರ್ಥ್ ನನಗೆ ಕರೆ ಮಾಡಿ ಅರ್ಜೆಂಟ್ ಆಗಿ ಮಾತನಾಡಬೇಕು ಎಂದು ಹೇಳಿದ್ದರು,  ಅವರು ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿಯಲ್ಲ, ಆತ ತುಂಬಾ ಸಂಭಾವಿತ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಶಿವಕುಮಾರ್, ಯಾವುದೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸುವ ಕಠಿಣ ಹೃದಯದ ವ್ಯಕ್ತಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ, ಅವರ ಸಾಲಕ್ಕಿಂತ ಆಸ್ತಿ ಹೆಚ್ಚಿದೆ ಎಂದು ಹೇಳಿದ್ದಾರೆ.
ಅಂತಹ ಧೈರ್ಯಶಾಲಿ ಹೀಗೆ ಮಾಡಿಕೊಂಡಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ, ಅವರನ್ನು ಯಾರಾದರೂ ಕರೆದುಕೊಂಡು ಹೋಗಿರಬಹುದಲ್ಲವೇ ಎಂದು ಹೇಳಿದ್ದಾರೆ.  
ಇನ್ನೂ ಸಿದ್ದಾರ್ಧ್ ಬರೆದಿದ್ದಾರೆ ಎಂಬ ಪತ್ರದ ಬಗ್ಗೆ ಮಾತನಾಡಿರುವ ಶಿವಕುಮಾರ್ ಪತ್ರದ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com