ಅಂತೆಯೇ ಕೇಂದ್ರ ರಕ್ಷಣಾ ಇಲಾಖೆಗೂ ಇಂತಹುದೇ ಪತ್ರ ನೀಡಿರುವ ಸಂಸದರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಮನವಿ ಪತ್ರ ನೀಡಿರುವ ಸಂಸದರು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುವಂತೆ ಕೋರಿದ್ದಾರೆ. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಂಸದರಾದ ನಳಿನ್ ಕುಮಾರ್ ಕಟೀಲ್, ಕರಡಿ ಸಂಗಣ್ಣ, ಭಗವಂತ್ ಖುಬಾ, ಬಿ ಸಿ ಗತ್ತಿಗೌಡ ಮತ್ತು ವೈ ದೇವೇಂದ್ರಪ್ಪ ಅವರು ಸಾಥ್ ನೀಡಿದರು.