ಮದುವೆಗೆ ಪೋಷಕರ ನಿರಾಕರಣೆ: ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನ, ಜೋಡಿ ಸಾವಿನಿಂದ ಪಾರು

ತಮ್ಮ ಮದುವೆಗೆ ಪೋಷಕರು ಒಪ್ಪಿಗೆ ನೀಡಲಿಲ್ಲವೆಂದು ಪ್ರೇಮಿಗಳು ರಾಮನಗರ ಜಿಲ್ಲೆಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ತಮ್ಮ ಮದುವೆಗೆ ಪೋಷಕರು ಒಪ್ಪಿಗೆ ನೀಡಲಿಲ್ಲವೆಂದು ಪ್ರೇಮಿಗಳು ರಾಮನಗರ ಜಿಲ್ಲೆಯ ರಾಮದೇವರಬೆಟ್ಟದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕಳೆದ ಬುಧವಾರ ನಡೆದಿದೆ.
ಕಳೆದ ಬುಧವಾರ ಸಂಜೆ ಜೋಡಿ ಅಪರಾಹ್ನ 2.30ಕ್ಕೆ ರಾಮದೇವರಬೆಟ್ಟಗೆ ಬಂದು ಎತ್ತರವಾದ ಬೆಟ್ಟದಿಂದ ಕೆಳಗೆ ಜಿಗಿದರು. ಮರವೊಂದರ ಮೇಲೆ ಮೊದಲು ಬಿದ್ದ ಜೋಡಿ ನಂತರ ಉರುಳಿ ಕೆಳಗೆ ಬಿತ್ತು. 100 ಅಡಿ ಎತ್ತರದಿಂದ ಬಿದ್ದರೂ ಕೂಡ ಗಾಯಗೊಂಡು ಸಾವಿನಿಂದ ಪಾರಾಗಿದ್ದಾರೆ. ಜೋಡಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪರಿಸ್ಥಿತಿ ಸ್ಥಿರವಾಗಿದೆ.
21 ವರ್ಷದ ಸುರೇಶ್ ಮತ್ತು 18 ವರ್ಷದ ಆತನ ಪ್ರೇಮಿ ಶ್ರೇಯಾ(ಹೆಸರು ಬದಲಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಬೆಂಗಳೂರಿನ ಆವಲಹಳ್ಳಿಯ ನಿವಾಸಿ ಸುರೇಶ್ ಆಗಿದ್ದು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಶ್ರೇಯಾ ಶ್ರೀನಗರ ವಾಸಿಯಾಗಿದ್ದು ಐಟಿಐ ವ್ಯಾಸಂಗ ಮಾಡುತ್ತಿದ್ದಾಳೆ.
ಕಳೆದ ಕೆಲ ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು ಮದುವೆಯಾಗಲು ನಿರ್ಧರಿಸಿದ್ದರು. ತಮ್ಮ ಮದುವೆ ವಿಷಯವನ್ನು ಪೋಷಕರಿಗೆ ಹೇಳಿದಾಗ ಶ್ರೇಯಾಳ ಪೋಷಕರು ಸುತಾರಂ ಒಪ್ಪಲಿಲ್ಲ. ಇಬ್ಬರೂ ಬೇರೆ ಜಾತಿಯವರಾಗಿದ್ದಾರೆ.
ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com