ಭೂಮಿ ಮಾರಾಟ ಮಾಡಿದ ಮೇಲೆ ಆ ಭೂಮಿಯ 3 ಅಡಿ ಆಳದಿಂದ ಹಿಡಿದು ಭೂಮಿಯ ಒಳಗಡೆ ಲಭ್ಯವಾಗಬಹದಾದ ಖನಿಜ ಸಂಪತ್ತು, ನಿಕ್ಷೇಪಗಳು ಅಥವಾ ಇನ್ನಾವುದೇ ಸಂಪತ್ತು ಈಭೂಮಿಯ ಮಾಲೀಕನಿಗೆ ಸೇರಿದ್ದಾಗಿರುತ್ತದೆ ಎಂದು 2014, ಮಾರ್ಚ್ 5ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗಣಿ ಮತ್ತು ಖನಿಜ ಸಂಪತ್ತು (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1957ರಡಿಯಲ್ಲಿ ಹೊರಡಿಸಿರುವ ಅಧಿಸೂಚನೆ ತಿಳಿಸುತ್ತದೆ, ಈ ಭೂಮಿ ಲೀಸ್ ಕಂ ಸೇಲ್ ಡೀಡ್ ಮಾಡುವ ಸಂದರ್ಭದಲ್ಲಿ ಈ ಕಾಯ್ದೆಯಡಿ ಅಧಿಸೂಚನೆ ಇರಲಿಲ್ಲ. ಆದರೆ ಈಗ ಒಂದು ವೇಳೆ ಭೂಮಿ ಮಾರಾಟದ ಮೂಲಕ ಪರಭಾರೆಯಾದರೆ ಈ ಭೂಮಿಯ ಖನಿಜ ಸಂಪತ್ತು, ನಿಕ್ಷೇಪಗಳು ಅಥವಾ ಇನ್ನಾವುದೇ ಸಂಪತ್ತು ಜಿಂದಾಲ್ ಸಂಸ್ಥೆಯದ್ದಾಗುತ್ತದೆ, ಆದ್ದರಿಂದ ರಾಜ್ಯ ಸರ್ಕಾರ ನೈಸರ್ಗಿಕ ಸಂಪತ್ತಿನ ಮೇಲಿನ ಈ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ, ಈ ಅಂಶಗಳನ್ನು ಕೂಡ ಸಚಿವ ಸಂಪುಟ ಉಪ ಸಮಿತಿಯು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ