ಸಾವಿನಲ್ಲಿ ಸಾರ್ಥ್ಯಕ್ಯ ಮೆರೆದ ಬೆಂಗಳೂರಿನ ಯುವಕ; ದೇಹದ ಅಂಗಾಂಗ ದಾನ

ಅಪಘಾತವಾದ ನಂತರ ಮೆದುಳು ನಿಷ್ಕ್ರಿಯಗೊಂಡ 28 ವರ್ಷದ ಯುವಕನ ದೇಹದ ಪ್ರಮುಖ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಪಘಾತವಾದ ನಂತರ ಮೆದುಳು ನಿಷ್ಕ್ರಿಯಗೊಂಡ 28 ವರ್ಷದ ಯುವಕನ ದೇಹದ ಪ್ರಮುಖ ಅಂಗಾಂಗಗಳನ್ನು 5 ಜನಕ್ಕೆ ದಾನ ಮಾಡಲಾಗಿದೆ.
ಕಳೆದ ಭಾನುವಾರ ವೆಲ್ಲೂರ್ ಜಂಕ್ಷನ್ ಬಳಿ ಅಶೋಕ್ ಕುಮಾರ್ ಎಂಬುವವರಿಗೆ ತಲೆಗೆ ತೀವ್ರ ಏಟಾಗಿ ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರ ಮೆದುಳು ನಿಷ್ಕ್ರಿಯವಾಗಿ ಮೃತಪಟ್ಟಿದ್ದರು. ಅವರ ದೇಹದ ಅಂಗಾಂಗಗಳಾದ ಹೃದಯ, ಕಿಡ್ನಿ ಮತ್ತು ಕಾರ್ನಿಯಾಗಳನ್ನು ದಾನ ಮಾಡಲು ಅವರ ಪತ್ನಿ ಮುಂದೆ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com