ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ಕತ್ತಿ ಹಿಡಿದು ಬ್ಯಾಂಕ್ ಗೆ ನುಗ್ಗಿ ಕ್ಯಾಶಿಯರ್ ಗೆ ಬೆದರಿಕೆ ಹಾಕಿದ ರೈತ

ಕತ್ತಿ ಝಳಪಿಸುತ್ತಾ ರೈತ ಬ್ಯಾಂಕಿನೊಳಗೆ ನುಗ್ಗಿದಾಗ ಅಲ್ಲಿ ಸೇರಿದ್ದ ಗ್ರಾಹಕರು ಕೆಲ ಕಾಲ ಆತಂಕಗೊಂಡ ...
Published on
ಧಾರವಾಡ: ಕತ್ತಿ ಝಳಪಿಸುತ್ತಾ ರೈತ ಬ್ಯಾಂಕಿನೊಳಗೆ ನುಗ್ಗಿದಾಗ ಅಲ್ಲಿ ಸೇರಿದ್ದ ಗ್ರಾಹಕರು ಕೆಲ ಕಾಲ ಆತಂಕಗೊಂಡ ಪರಿಸ್ಥಿತಿ ಧಾರವಾಡ ಜಿಲ್ಲೆಯ ಅಮಿನ್ ಬಾವಿ ಗ್ರಾಮದ ಯುಕೊ ಬ್ಯಾಂಕಿನಲ್ಲಿ ಕಳೆದ ನಡೆದಿದೆ. ರೈತನನ್ನು ಬಸಪ್ಪ ಜಿ ಮುಂದಿನ್ಮಾನಿ ಎಂದು ಗುರುತಿಸಲಾಗಿದೆ. ಕತ್ತಿ ತೋರಿದ ಕ್ಯಾಶಿಯರ್ ಬಳಿ ಹಣ ಬೇಕೆಂದು ಬಸಪ್ಪ ಬೆದರಿಕೆ ಹಾಕಿದ್ದಾರೆ.
ಕ್ಯಾಶಿಯರ್ ಬಳಿ ಬಂದು ನನ್ನ ಸಾಲದ ಮೊತ್ತ ನೀವು ಭರಿಸಬೇಕು ಎಂದು ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com