ಚಂದ್ರಕಾಂತ್ ಪಾಟೀಲ್ ನೀಡಿರುವ ದೂರಿನಲ್ಲಿ, ಕಳೆದ ಮಾರ್ಚ್ 4ರಂದು ಶಾಸಕರು ದೂರವಾಣಿಯಲ್ಲಿ ಮಾತನಾಡುವಾಗ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಟೆಂಡರ್ ನೀಡಿ ಕಾಮಗಾರಿ ಪೂರ್ಣಗೊಳಿಸದ ಕಾರಣ ನಿಂದಿಸಿದ್ದಾರೆ. ಒಂದು ಕೋಟಿ ರೂಪಾಯಿಗಳ ಟೆಂಡರ್ ನ ಗುತ್ತಿಗೆಯನ್ನು ರದ್ದುಪಡಿಸುವಂತೆ ಶಾಸಕರು ಹೇಳಿದ್ದಾರೆ. ಆದರೆ ಟೆಂಡರ್ ರದ್ದುಪಡಿಸುವ ಅಧಿಕಾರ ತಮಗಿಲ್ಲ ಎಂದಾಗ ಶಾಸಕ ಗುತ್ತೇದಾರ್ ತಮ್ಮನ್ನು ಕೊಳಕು ಶಬ್ದಗಳಲ್ಲಿ ನಿಂದಿಸಿದ್ದಾರೆ ಎಂದಿದ್ದಾರೆ.