ಧಾರವಾಡ: ವ್ಯಕ್ತಿಯೊಬ್ಬ ಬದುಕುಳಿತ್ತೀನಾ ಇಲ್ವಾ ಅಂತ ಅವಶೇಷಗಳಡಿ ಸಿಲುಕಿದ್ದಾಗ ತೆಗೆದುಕೊಂಡ ಸೆಲ್ಫಿ, ವೈರಲ್!

ಧಾರವಾಡದಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿದು 17 ಜನರು ಮೃತಪಟ್ಟಿದ್ದು ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿದು 17 ಜನರು ಮೃತಪಟ್ಟಿದ್ದು ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ ವ್ಯಕ್ತಿಯೋರ್ವ ಬದುಕುಳಿತ್ತೀನಾ ಇಲ್ಲ ಅಂತಾ ಸೆಲ್ಫಿ ತೆಗೆದುಕೊಂಡಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಟ್ಟಡದ ಅವಶೇಷದಡಿ ಸಿಲುಕಿ ಪವಾಡ ಸದೃಶ್ಯ ಬದುಕಿ ಬಂದಿದ್ದ ಮಂಜುನಾಥ್ ಯಾವಗಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ್ದು ನಾನು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ ತುಂಬಾ ಆತಂಕಗೊಂಡಿದ್ದೆ. ನನಗೆ ಒಳಗೆ ಅಲುಗಾಡಲು ನನಗೆ ಜಾಗವಿದಿದ್ದರಿಂದ ನಾನು ಈ ವೇಳೆ ಸೆಲ್ಫಿ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.
ನಾನು ಮೊಬೈಲ್ ತೆಗೆದು ನೋಡಿದಾಗ ಅದರಲ್ಲಿ ಸಿಗ್ನಲ್ ಇದ್ದಿದ್ದನ್ನು ಗಮನಿಸಿದೆ. ಕೂಡಲೇ ನಾನು ಬದುಕಿರುವುದನ್ನು ನನ್ನ ಕುಟುಂಬಸ್ಥರಿಗೆ ತಿಳಿಸುವ ಸಲುವಾಗಿ ಸೆಲ್ಫಿ ತೆಗೆದುಕೊಂಡು ಕಳುಹಿಸಿದೆ. 9 ಗಂಟೆಗಳ ಕಾಲ ನಾನು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವೇಳೆ ನಾನು ಓಂ ನಮಃ ಶಿವಾಯ ಎಂದು ಶಿವನಾಮವನ್ನು ಪಠಿಸುತ್ತಿದ್ದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com