ಬೆಳಗಾವಿ: ಟಿಪ್ಪರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೆಬ್ಬಾಳ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ಬೆಂಗಳೂರಿನ ನಾಗೇನಹಳ್ಳಿ ನಿವಾಸಿಗಳಾದ ಬಿ.ಎಸ್.ಬಾಬಯ್ಯ (65), ಅವರ ಸೊಸೆ ಅಜಿರಬಿ (34) ಹಾಗೂ ಮೊಮ್ಮಗ ಜಯಾದ್ ಅಬ್ಬಾಸ್ (5) ಮೃತ ದುರ್ದೈವಿಗಳು.