ಲಂಡನ್ ನಲ್ಲಿ ಹೆಚ್'ಡಿಕೆ: ಸಾಲಮನ್ನಾ ಕುರಿತು ಸಿಎಂ ಬಿಎಸ್'ವೈ ವಿರುದ್ಧ ಕಿಡಿ

ರೈತರ ಸಾಲ ಮನ್ನಾ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ
Updated on

ಬೆಂಗಳೂರು: ರೈತರ ಸಾಲ ಮನ್ನಾ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಪುತ್ರ ನಿಖಿಲ್ ಕುಮಾರಸ್ವಾಮಿ ನಟಿಸುತ್ತಿರುವ ಸಿನಿಮಾ ಕುರಿತ ಕೆಲಸ ಹಿನ್ನೆಲೆಯಲ್ಲಿ ಲಂಡನ್'ಗೆ ತೆರಳಿರುವ ಕುಮಾರಸ್ವಾಮಿಯವರು, ಶೀಘ್ರಗತಿಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ. 

ಕುಮಾರಸ್ವಾಮಿಯವರು ಅರಂಭಿಸಿರುವ ಬೆಳೆ ಸಾಲಮನ್ನಾ ಸಹಾಯವಾಣಿಗೆ ಮೂರು ದಿನಗಳಲ್ಲಿ ಒಟ್ಟು 2930 ರೈತರು ಕರೆ ಮಾಡಿದ್ದಾರೆ. ಈ ತಿಂಗಳ 4 ರಂದು ಸಹಾಯವಾಣಿ ಆರಂಭಿಸಲಾಗಿತ್ತು. ಆರಂಭವಾದದಿನವೇ 1251 ರೈತರು ಕರೆ ಮಾಡಿದ್ದರು. ಮರುದಿನ 5 ರಂದು 937 ರೈತರು ಮತ್ತು 6ರಂದು 742 ರೈತರು ಕರೆ ಮಾಡಿದ್ದರು. ಈ ಸಹಾಯವಾಣಿಯನ್ನು ಹಲವು ವಾರಗಳ ಕಾಲ ಮುಂದುವರೆಸಲಾಗುವುದು. ರೈತರು ಮೊಬೈಲ್ ಸಂಖ್ಯೆ 9164305868ಗೆ ಕರೆ ಮಾಡಿ ತಮ್ಮ ಬೆಳೆ ಸಾಲಮನ್ನಾದ ವಿವರಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com