ಚಾಮರಾಜನಗರ: ಕಾರು ರಿವರ್ಸ್ ತೆಗೆಯುವ ವೇಳೆ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಗು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.
ಸತ್ತೇಗಾಲ ಹ್ಯಾಂಡ್ ಪೋಸ್ಟ್ನ ಚಿಕ್ಕದರ್ಗಾದ ಅಯಾಜ್ ಖಾನ್ ಪುತ್ರಿ ಸೆಹರೀನ್ ತಾಜ್ (2) ಮೖತಪಟ್ಟ ದುರ್ದೈವಿ. ಚಿಕ್ಕದರ್ಗಾದ ಸಮೀಪದಲ್ಲಿ ಶುಕ್ರವಾರ ರಾತ್ರಿ ಆಟವಾಡುತ್ತಿದ್ದ ವೇಳೆ ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸೈಯದ್ ಅಬ್ದುಲ್ ಗನಿ ಎಂಬಾತ ತನ್ನ ಡಸ್ಟರ್ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಆಟವಾಡುತ್ತಿದ್ದ ಸೆಹರಿನ್ ತಾಜ್ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾಳೆ.
ಮೃತಪಟ್ಟ ಬಾಲಕಿಯ ತಂದೆ ಅಯಾಜ್ ಖಾನ್ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಆರೋಪಿ ಸೈಯದ್ ಅಬ್ದುಲ್ನನ್ನು ಬಂಧಿಸಿದ್ದಾರೆ.
ವರದಿ: ಗೂಳಿಪುರ ನಂದೀಶ ಎಂ
Advertisement