ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ

ಕೊಪ್ಪಳದಲ್ಲಿ ನ.05 ರಿಂದ ನಡೆಯುತ್ತಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ನಕಲಿ ದಾಖಲೆ ನೀಡಿದ್ದ ಯುವಕನೋರ್ವ ಸಿಕ್ಕಿಬಿದ್ದಿದ್ದಾನೆ. 
ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ
ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ
Updated on

ಕೊಪ್ಪಳ: ಕೊಪ್ಪಳದಲ್ಲಿ ನ.05 ರಿಂದ ನಡೆಯುತ್ತಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ನಕಲಿ ದಾಖಲೆ ನೀಡಿದ್ದ ಯುವಕನೋರ್ವ ಸಿಕ್ಕಿಬಿದ್ದಿದ್ದಾನೆ. 

ರಾಜ್ಯದ 6 ಜಿಲ್ಲೆಯ ಯುವಕರಿಗಾಗಿ ಸೇನಾ ಭರ್ತಿ ರ್ಯಾಲಿಯನ್ನು ನಡೆಸಲಾಗುತ್ತಿತ್ತು. ಆದರೆ ರಾಜಸ್ಥಾನದಿಂದ ಬಂದಿದ್ದ ಯುವಕ ರಾಜೇಂದ್ರ ಸಿಂಗ್ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ. 

ರಾಜಸ್ಥಾನದ ವ್ಯಾಸಂಗ ಪ್ರಮಾಣಪತ್ರಗಳ ಜೊತೆಗೆ ತಾನು ಗಂಗಾವತಿ ನಿವಾಸಿ ಎಂದು ಪ್ರಮಸಣ ಪತ್ರ ಸಲ್ಲಿಸಿದ್ದಾನೆ. ದೈಹಿಕ ಪರೀಕ್ಷೆಗೂ ಹಾಜರಾಗಿದ್ದ ರಾಜೇಂದ್ರ ಸಿಂಗ್, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಆ ನಂತರ ದಾಖಲಾತಿ ಪರಿಶೀಲನೆ ವೇಳೆ ಈತ ನಕಲಿ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಆರ್ಮಿ ಕರ್ನಲ್ ಕೊಪ್ಪಳ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಯುವಕ ನಕಲಿ ಪ್ರಮಾಣಪತ್ರ ನೀಡಿರುವುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com