ಮಂಡ್ಯ: ಮಂಡ್ಯ ತಾಲೂಕು ಹನಿಯಂಬಾಡಿ ಗ್ರಾಮದ ನಿವಾಸಿ ದೊಡ್ಡನಾರಾಯಣಿ, ಬೋರಮ್ಮ ದಂಪತಿಗಳ ಪುತ್ರ ದೇವರಾಜ್ ಹೆಚ್. ಏನ್(40) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಆರ್.ಪಿ.ಎಫ್. ಯೋಧ. ದೇವರಾಜ್ ಹೆಚ್. ಏನ್ ಜಾಂಡೀಸ್ ಕಾಯಿಲೆಗೆ ಒಳಗಾಗಿದ್ದರು. ದೇವರಾಜ್ ಹೆಚ್. ಏನ್, ಅವರು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೃತ ಯೋಧನ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಮೃತ ಯೋಧನ ಪಾರ್ಥಿವ ಶರೀರ ಹುಟ್ಟೂರು ಹನಿಯಂಬಾಡಿ ಗ್ರಾಮವನ್ನು ತಲುಪುವ ಸಾಧ್ಯತೆ ಇದೆ.ಪತ್ನಿ ಗಾಯಿತ್ರಿ, ಆದರ್ಶ, ಮಂಜು ಎಂಬ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ದೇವರಾಜ್ ಹೆಚ್. ಏನ್ ಅವರು, ಚೆನ್ನೈನಲ್ಲಿ 5ನೇ ಬೆಟಾಲಿಯನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
Advertisement