ಮಂಗಳೂರು: ಪಕ್ಕದ ಮನೆಯ ಆವರಣಗೋಡೆ ಕುಸಿದು ಇಬ್ಬರು ಮಕ್ಕಳ ಧಾರುಣ ಸಾವು

ಪಕ್ಕದ ಮನೆಯ ಆವರಣ ಗೋಡೆ ಕುಸಿದು ಅವಶೇಷಗಳಡಿ ಸಿಲುಕು ಇಬ್ಬರು ಮಕ್ಕಳು ಮೃತಪಟ್ಟ ಕರುಣಾಜನಕ ಘಟನೆ ಇಲ್ಲಿನ ಪಡೀಲ್ ಸಮೀಪದ ಶಿವನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಕುಸಿದುಬಿದ್ದ ಗೋಡೆ
ಕುಸಿದುಬಿದ್ದ ಗೋಡೆ
Updated on

ಮಂಗಳೂರು: ಪಕ್ಕದ ಮನೆಯ ಆವರಣ ಗೋಡೆ ಕುಸಿದು ಅವಶೇಷಗಳಡಿ ಸಿಲುಕು ಇಬ್ಬರು ಮಕ್ಕಳು ಮೃತಪಟ್ಟ ಕರುಣಾಜನಕ ಘಟನೆ ಇಲ್ಲಿನ ಪಡೀಲ್ ಸಮೀಪದ ಶಿವನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ರಾಮಚಂದ್ರ ಹಾಗೂ ರಜನಿ ದಂಪತಿಗಳ ಮಕ್ಕಳಾದ ವೇದಾಂತ್ ( 7 )ಮತ್ತು ವರ್ಷಿಣಿ( 8 ) ಮೃತಪಟ್ಟ ಮಕ್ಕಳು.

ಇಂದು ಸಂಜೆಯಿಂದ ನಗರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಭಾರೀ ಮಳೆಗೆ 20 ಅಡಿ ಎತ್ತರದ ಈ ಆವರಣ ಗೋಡೆ ಕುಸಿದಿದೆ. ಈ ವೇಳೆ ಮಕ್ಕಳು ಮನೆಯೊಳಗಡೆ ಓದುತ್ತಿದ್ದರು. ದುರ್ಘಟನೆ ನಡೆಯುವಾಗ ತಂದೆ ತಾಯಿ ಮನೆಯ ಹೊರಗಿದ್ದರು ಎನ್ನಲಾಗಿದೆ.

ಈ ಸಂಬಂಧ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com