ಚಿತ್ರದುರ್ಗ: ಕರಡಿ ದಾಳಿಗೆ ಓರ್ವ ಬಲಿ, ನಾಲ್ವರಿಗೆ ಗಾಯ

ಕರಡಿಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ: ಕರಡಿ ದಾಳಿಗೆ ಓರ್ವ ಬಲಿ, ನಾಲ್ವರಿಗೆ ಗಾಯ
ಚಿತ್ರದುರ್ಗ: ಕರಡಿ ದಾಳಿಗೆ ಓರ್ವ ಬಲಿ, ನಾಲ್ವರಿಗೆ ಗಾಯ

ಚಿತ್ರದುರ್ಗ: ಕರಡಿಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ.

ಹೊಸದುರ್ಗದ ಬುಕ್ಕಸಾಗರದ ದಳವಾಯಿ ಹಟ್ಟಿಯಲ್ಲಿ ನಡೆದ ಕರಡಿ ದಾಳಿಗೆ ಗ್ರಾಮದ ರಾಜಪ್ಪ (45)  ಎಂಬಾತ ಸಾವನ್ನಪ್ಪಿದ್ದಾರೆ. 

ಶುಕ್ರವಾರ ಮಧ್ಯಾಹ್ನ ದಳವಾಯಿ ಕಟ್ಟೆ ಗ್ರಾಮದ ಮನೆ ಮುಂದೆ ನಾಲ್ಕೈದು ಮಂದಿ ಮಾತನಾಡುತ್ತಾ ಕುಳಿತಿದ್ದಾಗ ಕರಡಿ ಒಟ್ಟು ನಾಲ್ವರ ಮೇಲೆ ದಾಳಿ ನಡೆಸಿದ್ದು ರಾಜಪ್ಪ ಮೃತಪಟ್ಟರೆ ಇತರೆ ಮೂವರಿಗೆ ಗಾಯಗಳಾಗಿದೆ. ಗಾಯಾಳುಗಳಾದ ರಮೇಶ, ಉಮೇಶ, ಶಶಿ, ತಿಪ್ಪೇಸ್ವಾಮಿ,ಅವರುಗಳನ್ನು ಹೊಸದುರ್ಗದ ಶ್ರೀರಾಮಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನು ಘಟನೆಯಿಂದಾಗಿ ಆಕ್ರೋಶಗೊಂಡಿರುವ ಗ್ರಾಮಸ್ಥರು ಕರಡಿ ಮೇಲೆ ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದು ಕರಡಿ ಕೂಡ ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದೆ. ಇದೇವ್ ವೇಳೆ ಅರಣ್ಯ ಇಲಾಖೆ ನಿರ್ಲಕ್ಷವೇ ರಾಜಪ್ಪನ ಸಾವಿಗೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಜಾನೆ ಗ್ರಾಮಕ್ಕೆ ಭೇಟಿ ಕೊಟ್ಟ ಅರಣ್ಯಾಧಿಕಾರಿಗಳು ಗಾಯಾಳುಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಶ್ರೀರಾಮಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com