ಯಶವಂತಪುರ ವೃತ್ತದಿಂದ ಕೆನ್ನಮೆಟಲ್‌ ಕಾರ್ಖಾನೆವರೆಗಿನ ರಸ್ತೆಗೆ ಡಾ. ಶಿವಕುಮಾರ ಸ್ವಾಮೀಜಿ‌ ಹೆಸರು ನಾಮಕರಣ

ನಗರದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್‌ ಕಾರ್ಖಾನೆಯವರೆಗೆ ಕೊನೆಗೊಳ್ಳುವ ಮೇಲುಸೇತುವೆ ಹಾಗೂ ಯಶವಂತಪುರ ವೃತ್ತದಿಂದ(ಸಂವಿಧಾನ ವೃತ್ತ) ಕೆನ್ನಮೆಟಲ್‌ ಕಾರ್ಖಾನೆವರೆಗಿನ ರಸ್ತೆಗೆ ಡಾ. ಶಿವಕುಮಾರ ಸ್ವಾಮೀಜಿ‌ ರವರ ಹೆಸರನ್ನು ನಾಮಕರಣ ಮಾಡಲಾಗಿದೆ. 
ಡಾ.ಶಿವಕುಮಾರ್ ಸ್ವಾಮೀಜಿ
ಡಾ.ಶಿವಕುಮಾರ್ ಸ್ವಾಮೀಜಿ
Updated on

ಬೆಂಗಳೂರು: ನಗರದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್‌ ಕಾರ್ಖಾನೆಯವರೆಗೆ ಕೊನೆಗೊಳ್ಳುವ ಮೇಲುಸೇತುವೆ ಹಾಗೂ ಯಶವಂತಪುರ ವೃತ್ತದಿಂದ(ಸಂವಿಧಾನ ವೃತ್ತ) ಕೆನ್ನಮೆಟಲ್‌ ಕಾರ್ಖಾನೆವರೆಗಿನ ರಸ್ತೆಗೆ ಡಾ. ಶಿವಕುಮಾರ ಸ್ವಾಮೀಜಿ‌ ರವರ ಹೆಸರನ್ನು ನಾಮಕರಣ ಮಾಡಲಾಗಿದೆ. 

ಗೊರಗುಂಟೆಪಾಳ್ಯ ಮೇಲುಸೇತುವೆ ಬಳಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮಿ ಅವರು ನಾಮಕರಣ ಮಾಡಿದರು. 

ಬಳಿಕ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರು ನಗರದಲ್ಲಿ ಅಜರಾಮರವಾಗಿರುವಂತೆ ಮಾಡಲು ಬಿಬಿಎಂಪಿ ತುಮಕೂರು ರಸ್ತೆ ಹಾಗೂ ಮೇಲು ಸೇತುವೆಗೆ ಅವರ ಹೆಸರು ನಾಮಕರಣ ಮಾಡುವ ಮೂಲಕ ಗೌರವ ಸೂಚಿಸಿರುವುದು ಶ್ಲಾಘನೀಯ ಸಂಗತಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com