ಬೆಳಗಾವಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೊಬ್ಬ ಹಿಂಡಲಗಾ ಜೈಲಿನ ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ಬೇಧಿಸಿ ತಪ್ಪಿಸಿಕೊಳ್ಳಲು ಯಶಸ್ವಿ ಆಗಿದ್ದಾನೆ. ಈತ ಹಗ್ಗ ಹಾಗೂ ಹೊದಿಕೆಯ ಸಹಾಯದಿಂದ ಜಿಲಿನ ಗೊಡೆಗಳಾಚೆಗೆ ಹಾರಿ ಪರಾರಿಯಾಗಿದ್ದಾನೆ. ಈ ಘಟನೆ ಏ.22 ರ ರಾತ್ರಿ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.ಅಪರಾಧಿಯನ್ನು ಹಿಡಿದು ಕೊಟ್ಟವರಿಗೆ ಅಥವಾ ಅವನ ಕುರಿತು ಸುಳಿವು ನೀಡಿದವರಿಗೆ ಜೈಲು ಇಲಾಖೆ ನಗದು ಬಹುಮಾನವನ್ನು ಘೋಷಿಸಿದೆ.