ನದಿ ತೀರವನ್ನು ಸ್ವಚ್ಛ ಮಾಡಲು ಸುಮಾರು 20 ಟ್ರಾಕ್ಟರ್ ಗಳನ್ನು ಬಳಸಲಾಗಿತ್ತು. ಎರಡೂವರೆ ಕಿಲೋ ಮೀಟರ್ ನಷ್ಟು ಉದ್ದದವರೆಗೆ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಗಳು, ಬಾಟಲ್ ಗಳು ಬಿದ್ದಿದ್ದವು. ಈ ಪ್ರದೇಶ ಇಷ್ಟೊಂದು ಕಲುಷಿತವಾಗಲು ಮುಜರಾಯಿ ಇಲಾಖೆಯ ಮತ್ತು ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಕಾರ್ಯಕರ್ತರು ಆರೋಪಿಸಿದರು.