ಸೇತುವೆ ಭಾಗದಲ್ಲಿ ಆತ ಕಾಣದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಆಗ ಆತ ನದಿಗೆ ಹಾರಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. 2 ಕಿ.ಮೀ. ವರಗೆ ಈಜಾಡಿ ಶರಣಪ್ಪ ದಡ ಸೇರಿದ್ದಾನೆ. ವೀರಘಟ್ಟದ ಆದಿ ಮೌನಲಿಂಗೇಶ್ವರ ಸನ್ನಿಧಾನದಲ್ಲಿ ನಿತ್ರಾಣಗೊಂಡ ಆತನನ್ನು ಜನರು ರಕ್ಷಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.