ಸತತ ಮಳೆಯಿಂದ ಜಲಾಶಯಗಳ ಒಳ ಹರಿವು ಅಧಿಕವಾಗಿದೆ. ರವಿವಾರ ಸಂಜೆಯಿಂದ ಸೋಮವಾರ ಬೆಳಗಿನಜಾವದವರೆಗೆ 5 ಗೇಟ್ಗಳನ್ನು ತೆರೆದು 0.83 ಟಿಎಂಸಿ ನೀರನ್ನು ಹೊರ ಬಿಡಲಾಗಿತ್ತು. ಸೋಮವಾರ ಸಂಜೆವರೆಗೂ ಮಳೆ ನಿರಂತರವಾಗಿರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆಯಾಗಿದೆ. ಇದರಿಂದಾಗಿ 10 ಗೇಟ್ಗಳನ್ನು ತೆರೆದು 43100 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಸುರಕ್ಷ ತೆಯ ಹಿತದೃಷ್ಟಿಯಿಂದ ಕದ್ರಾದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗಂಜಿಕೇಂದ್ರ ಮಾಡಲಾಗಿದ್ದು, ಅಲ್ಲಿ 7ಕುಟುಂಬಗಳ 23ಜನರನ್ನು ಸ್ಥಳಾಂತರಿಸಲಾಗಿದೆ.