ರಕ್ಷಣೆ ವೇಳೆ ಮುಗುಚಿದ ಬೋಟ್: 12 ಕಿ.ಮೀ ಈಜಿ ದಡ ಸೇರಿದ ಕಮಾಂಡರ್ ಚೇತನ್ ಕುಮಾರ್

ಹಂಪಿಯ ವಿರೂಪಾಪುರ ನಡುಗಡ್ಡೆಯಲ್ಲಿ "ಸಿಲುಕಿದ್ದವರ" ರಕ್ಷಿಸಲು ತೆರಳಿದ ಎನ್​ಡಿಆರ್​​ಎಫ್​  ದೋಣಿ  ನೀರಿನ  ಪ್ರವಾಹದ ರಭಸಕ್ಕೆ ಮಗುಚಿ  ರಕ್ಷಣಾ ಸಿಬ್ಬಂದಿ ನೀರು ಪಾಲಾಗಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್​ ಮೂಲಕ ರಕ್ಷಣೆ ಮಾಡಲಾಗಿದೆ.
ರಕ್ಷಣೆ ವೇಳೆ ಮುಗುಚಿದ ಬೋಟ್: 12 ಕಿ.ಮೀ ಈಜಿ ದಡ ಸೇರಿದ ಕಮಾಂಡರ್ ಚೇತನ್ ಕುಮಾರ್

ಕೊಪ್ಪಳ: ಹಂಪಿಯ ವಿರೂಪಾಪುರ ನಡುಗಡ್ಡೆಯಲ್ಲಿ "ಸಿಲುಕಿದ್ದವರ" ರಕ್ಷಿಸಲು ತೆರಳಿದ ಎನ್​ಡಿಆರ್​​ಎಫ್​  ದೋಣಿ  ನೀರಿನ  ಪ್ರವಾಹದ ರಭಸಕ್ಕೆ ಮಗುಚಿ  ರಕ್ಷಣಾ ಸಿಬ್ಬಂದಿ ನೀರು ಪಾಲಾಗಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್​ ಮೂಲಕ ರಕ್ಷಣೆ ಮಾಡಲಾಗಿದೆ. 

ದೋಣಿ ​ ಮುಳುಗಿದ ಪರಿಣಾಮ ಐವರು ರಕ್ಷಣಾ ಸಿಬ್ಬಂದಿ ನೀರುಪಾಲಾಗಿದ್ದರು.ಅವರಲ್ಲಿ  ಒಬ್ಬರು ಈಜಿ  ದಡ ಸೇರಿದ್ದರು. ಉಳಿದವರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್​ ನೆರವು ಕೋರಲಾಗಿತ್ತು. 

ಹೆಲಿಕಾಪ್ಟರ್ ಮೂಲಕ  ಶೋಧನೆ ನಡೆಸಿದಾಗ ನಾಲ್ವರು ರಕ್ಷಕರು ದೋಣಿ ಮುಳುಗಿದ ಸ್ಥಳದಲ್ಲಿಯೇ ಗಿಡವನ್ನು ಆಶ್ರಯಿಸಿ ನೀರಿನ ರಭಸದ ನಡುವೆಯೂ ಮೂರು ತಾಸುಗಳು ರಕ್ಷಣೆಗಾಗಿ ಕಾದಿದ್ದರು. ಬಳಿಕ ಅವರನ್ನೆಲ್ಲ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. 

ಆದರೆ, ಮತ್ತೋರ್ವ ಎನ್​ಡಿಆರ್​​ಎಫ್​ಸಿಬ್ಬಂದಿ ಕೊಚ್ಚಿಕೊಂಡು ಹೋಗಿದ್ದು ಆತನಿಗಾಗಿ ಹೆಲಿಕಾಪ್ಟರ್ ಮೂಲಕ  ಹುಡುಕಾಟ ನಡೆಸಿದಾಗ ಬೋಟ್ ಮುಳುಗಿದ 12 ಕಿ.ಮೀ ದೂರ ನೀರಿನ ರಭಸದ ಜೊತೆ ಈಜಿ ಕಮಾಂಡರ್ ಚೇತನ್‌ಕುಮಾರ್ ದಡ ಸೇರಿದ್ದಾರೆ. ಮತ್ತೆ ಜನರನ್ನು ರಕ್ಷಿಸಲು ಸಿದ್ಧನೆಂದು ವೀಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com