ರಕ್ಷಾ ಬಂಧನದಂದು ರಕ್ತಪಾತ! ತಂಗಿ ಭೇಟಿಯಾಗಲು ಬಂದ ಅಣ್ಣನ ಬರ್ಬರ ಹತ್ಯೆ

ರಕ್ಷಾಬಂಧನಕ್ಕೆ ತಂಗಿಯನ್ನು ಕಾಣಲು ಬಂದ ಅಣ್ಣನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕಾಮರೆಡ್ಡಿ ಆಸ್ಪತ್ರೆ ಬಳಿ ಗುರುವಾರ ತಡರಾತ್ರಿ ನಡೆದಿದೆ.
ರವಿ ಚಿಂಚೋಳಿ
ರವಿ ಚಿಂಚೋಳಿ

ಕಲಬುರಗಿ:  ರಕ್ಷಾಬಂಧನಕ್ಕೆ  ತಂಗಿಯನ್ನು ಕಾಣಲು ಬಂದ ಅಣ್ಣನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕಾಮರೆಡ್ಡಿ ಆಸ್ಪತ್ರೆ ಬಳಿ ಗುರುವಾರ ತಡರಾತ್ರಿ ನಡೆದಿದೆ.

ಆಳಂದ‌ಪಟ್ಟಣದ ನಿವಾಸಿ ರವಿ ಚಿಂಚೋಳಿ (35) ಕೊಲೆಯಾದ ದುರ್ದೈವಿ. ಇವರು ನಿನ್ನೆ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಸಹೋದರಿಯ ಯೋಗ-ಕ್ಷೇಮ ವಿಚಾರಿಸಲು ಕಾಮರೆಡ್ಡಿ ಆಸ್ಪತ್ರೆಗೆ ತೆರಳಿದ್ದರು.

ರಾತ್ರಿ ವೇಳೆಯಲ್ಲಿ ಆಸ್ಪತ್ರೆಯ ಮುಂದಿರುವ ಉದ್ಯಾನವನದಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

ಘಟನೆ ಕುರಿತಂತೆ  ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com