ವಿಜಯಪುರ: ಕೆರೆಯಲ್ಲಿ ಮುಳುಗಿ ನೀರು ಪಾಲಾಗಿದ್ದ ಇಬ್ಬರು ಬಾಲಕರು ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.
ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುದೀಪ್ (10) ಹಾಗೂ ಮಾಳಪ್ಪ (10) ಮೃತಪಟ್ಟ ಬಾಲಕರು.
ಮಂಗಳವಾರ ಸಂಜೆ ಬಾಲಕರು ಕೆರೆಯಲ್ಲಿ ಈಜಲು ತೆರಳಿದಾಗ ನೀರು ಪಾರಾಗಿದ್ದರು. ಇಂದು ಇಬ್ಬರ ಮೃತದೇಹಗಳು ಪತ್ತೆಯಾಗಿದೆ.
ಮೃತ ಬಾಲಕರ ಕುಟುಂಬಶೋಕ ಸಾಗರದಲ್ಲಿ ಮುಳುಗಿದ್ದು ಘಟನೆ ಸಂಬಂಧ ಬಸವನಬಾಗೇವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...
Advertisement