ಬೆಂಗಳೂರು: ಬಿಎಂಟಿಸಿ ಮಹಿಳಾ ಕಂಡಕ್ಟರ್ ಓರ್ವಳ ಮೇಲೆ ನಡೆದಿದ್ದ ಆ್ಯಸಿಡ್ ದಾಳಿಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಭಾವಮೈದ ಸೇರಿ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.
ಬೆಂಗಳುರು ಉತ್ತರ ವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರುಗಾಯತ್ರಿನಗರದ ಅರುಣ್ ನಾಯಕ್ (38) ಮತ್ತು ನಾಗಸಂದ್ರದ ಕುಮಾರ್ ನಾಯಕ್ (30) ಎನ್ನುವವರನ್ನು ಬಂಧಿಸಿದ್ದು ಇದರಲ್ಲಿ ಅರುಣ್ ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕನಾಗಿದ್ದ. ಸಂತ್ರ್ಸ್ಥೆ ಇಂದಿರಾ ಈತನ ಸಂಬಂಧಿಯಾಗಿದ್ದಲ್ಲದೆ ಸಲುಗೆಯಿಂದ ಇದ್ದರೆಂದು ಹೇಳಲಾಗಿದೆ.
ಆದರೆ ಕಾರಣಾಂತರದಿಂದ ಇಂದಿರಾ ಇತ್ತೀಚೆಗೆ ಅರುಣ್ ಜತೆ ಅಂತರ ಕಾಯ್ದುಕೊಂಡಿದ್ದು ಇದರಿಂಡ ಆರೋಪಿ ಅರುಣ್ ಕ್ರುದ್ದನಾಗಿದ್ದ. ಡಿ.19ರಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಬಸ್ ನಿರ್ವಾಹಕರಾಗಿದ್ದ ಇಂದಿರಾ ಮನೆಯಿಂದ ಬಸ್ ಡಿಪೋಗೆ ತೆರಳುವಾಗ ತನ್ನ ಸ್ನೇಹಿತನೊಡನೆ ಸೇರಿ ಬೈಕನ್ನೇರಿ ಬಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದ,
ಆ್ಯಸಿಡ್ ದಾಳಿಯ ಬಳಿಕ ಇಂದಿರಾ ಕುತ್ತಿಗೆ ಹಾಗೂ ಇತರೆ ಭಾಗಗಳಲ್ಲಿ ಗಾಯಗಳಾಗಿದ್ದು ಈ ಸಂಬಂಧ ಆಕೆ ಪೋಲೀಸರಿಗೆ ದೂರಿತ್ತಿದ್ದರು. ದೂರು ಹಿನ್ನೆಲೆ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿಗಳ ತಂಡ ಆರೋಪಿಗಳ ಬಂಧಿಸುವಲ್ಲಿ ಸಫಲವಾಗಿದೆ.
Advertisement