ಈ ಸಂದರ್ಭದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಎಸ್.ಆರ್.ಪಾಟೀಲ್ ಅವರಿಗೆ ಸುಮ್ಮನಾಗುವಂತೆ ತಿಳಿಸಿದಾಗ, ಇನ್ನಷ್ಟು ಸಿಟ್ಟಿಗೆದ್ದ ಅವರು, ಸಚಿವ ಸ್ಥಾನ ಹಂಚಿಕೆಯಲ್ಲಿಯೂ ಅನ್ಯಾಯವಾಗಿದೆ. ದಕ್ಷಿಣ ಕನ್ನಡ ಭಾಗದವರಿಗೆ ಸಭಾಪತಿ, ಸಭಾನಾಯಕಿ, ಸೇರಿ ಒಳ್ಳೊಳ್ಳೆ ಖಾತೆಗಳನ್ನು ನೀಡಲಾಗಿದ್ದು, ಉತ್ತರ ಕರ್ನಾಟಕ ಭಾಗದವರಿಗೆ ಮಾತ್ರ ಈರುಳ್ಳಿ, ಬೆಳ್ಳುಳ್ಳಿ ಖಾತೆಗಳನ್ನು ಹಂಚಿಕೆಮಾಡಲಾಗಿದೆ. ಸದನದಲ್ಲಿ ಏನು ಮಾತನಾಡಬೇಕು ಎಂಬುದು ತಮಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.