ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ವೇಳೆ ವೇದಿಕೆಯೊಂಡರ ಚಪ್ಪರ ಕುಸಿದಿದ್ದು ಹಲವ್ರು ಗಾಯಗೊಂಡಿದ್ದಾರೆ. ಮಹಾಮಸ್ತಕಾಭಿಷೇಕ ನಡೆಯುತ್ತಿದ್ದ ಸ್ಥಳದಲ್ಲಿನ ಪಂಚಮಹಾವೈಭವ ವೇದಿಕೆಯ ಚಪ್ಪರ ಕುಸಿದಿದೆ.
ವೇದಿಕೆಗೆ ಹಾಲ್ಕಲಾಗಿದ್ದ ಪೆಂಡಾಲ್ ಕುಸಿದಿದ್ದು ಹಲವರು ಅದರಡಿಗೆ ಸಿಕ್ಕು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೆಂಡಾಲ್ ಅಡಿಯಲ್ಲಿ ಇನ್ನೂ ಹಲವ್ರು ಸಿಕ್ಕಿಹಾಕಿಕೊಂಡಿರುವ ಶಂಕೆ ಇದು ಅಗ್ನಿಶಾಮಕ ದಳ ಹಾಗು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ತಗಡಿನ ಶೀಟುಗಳಿಂದ ರಚಿಸಲಾಗಿದ್ದ ಈ ಪೆಂಡಾಲ್ ನ ಬಹುಭಾಗ ಕುಸಿದಿರುವುದಾಗಿ ವರದಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.