ಫೆಬ್ರವರಿ 4ರಂದು ನೆಲ್ಯಹುದಿಕೇರಿಯಿಂದ ಕಾಲೇಜು ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿ ನಿಗೂಢವಾಗಿ ಕಣ್ಮರೆಯಾಗಿದ್ದಳು.ಕಡೆ ಕ್ಷಣದವರೆಗೆ ಆಕೆ ಮುಂಬೈನಲ್ಲಿದ್ದ ತನ್ನ ಸಂಬಂಧಿ ಕಿಶೋರ್ ಎಂಬಾತನೊಡನೆ ಮೊಬೈಲ್ ಮೂಲಕ ಮಾತನಾಡುತ್ತಿದ್ದಳು.ಆದರೆ ಇದ್ದಕ್ಕಿದ್ದಂತೆ ಕರೆ ಕಟ್ ಆಗಿದ್ದು ಆಕೆ ಕಿರುಚಿದ್ದು ಸಹ ಕೇಳಿಸಿತ್ತು. ಆದರೆ ಮನೆಯವರು ಎಷ್ಟೇ ಹುಡುಕಿದರೂ ಯುವತಿಯ ಸುಳಿವು ಮಾತ್ರ ಲಭ್ಯವಾಗಿಲ್ಲ.