ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎಚ್ಎಎಲ್, “ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆದುಕೊಂಡಿಲ್ಲವೆಂಬ ಅಗ್ನಿಶಾಮಕ ಇಲಾಖೆಯ ಆರೋಪ ಹಾಗೂ 2019 ಫೆ. 19ರಂದು ನೋಟಿಸ್ ನೀಡಲಾಗಿದೆ ಎಂಬ ಹೇಳಿಕೆಯನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಎಚ್ಎಎಲ್ಗೆ ಯಾವುದೇ ನೋಟಿಸ್ ನೀಡಿಲ್ಲ. ಬದಲಿಗೆ ನಿರ್ದೇಶಕರು, ರಕ್ಷಣಾ ಸಚಿವಾಲಯಕ್ಕೆ ನೀಡಿದ ನೋಟಿಸ್ ಪ್ರತಿಯೊಂದನ್ನು ಕಳುಹಿಸಿಕೊಡಲಾಗಿದೆ. ಅದರಲ್ಲಿ ವೈಮಾನಿಕ ಪ್ರದರ್ಶನ ನಡೆಯುವ ವಾಯುನೆಲೆಯ ಜಾಗ, ತಾತ್ಕಾಲಿಕ ರಚನೆಗಳನ್ನಷ್ಟೆ ಉಲ್ಲೇಖಿಸಲಾಗಿದೆಯೇ ಹೊರತು, ವಾಹನ ನಿಲುಗಡೆ ಜಾಗದ ಬಗ್ಗೆ ಯಾವುದೇ ಅಂಶಗಳಿಲ್ಲ. ಜನರ ಗಮನವನ್ನು ಪಾರ್ಕಿಂಗ್ ಸ್ಥಳದಿಂದ ಏರ್ ಶೋ ನಡೆದ ಸ್ಥಳದತ್ತ ಸೆಳೆಯಲು ಅಗ್ನಿಶಾಮಕ ಇಲಾಖೆ ಯತ್ನಿಸಿದೆ’ ಎಂದ ಸ್ಪಷ್ಟಪಡಿಸಿದೆ.