ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮಿಗಳು ಇಂದು ಶಿವೈಕ್ಯರಾಗಿದ್ದಾರೆ. ತಮ್ಮ ಕಾಯಕ ನಿಷ್ಠೆ ಸಮಾಜ ಸೇವೆಯಿಂದ ಭಕ್ತರು, ಸಾಮಾನ್ಯ ಜನರ ಮನೆದೇವರಂತಾಗಿದ್ದ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಒಮ್ಮೆ ಸ್ವಾಮೀಜಿ ಕುರಿತಂತೆ ಕವಿತೆಯನ್ನು ರಚಿಸಿದ್ದರು ಎನ್ನುವುದು ಅಚ್ಚರಿಯಾದರೂ ಸತ್ಯ.