ಶ್ರೀಗಳ ಅಗಲಿಕೆ ಕುರಿತು ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ "ಶ್ರೀಗಳ ದೇಹತ್ಯಾಗಕ್ಕೆ ನಾವು ದುಃಖಪಡಬೇಕಿಲ್ಲ. ಅವರು ಲೋಕಕ್ಲ್ಯಾಣ ಮಾಡಿದವರು.ಜನಕಲ್ಯಾಣದ ಮೂಲಕ ಅವರು ನೇರವಾಗಿ ಸ್ವರ್ಗಾರೋಹಣ ಮಾಡುತ್ತಿದ್ದಾರೆ.ಧರ್ಮ, ನ್ಯಾಯ ಸತ್ಯದಲ್ಲಿ ಬದುಕಿ ಲೋಕಕ್ಕೆ ಬೇಕಾದ ಹಿತವನ್ನು ನೀಡಿರುವ ಸ್ವಾಮೀಜಿಗಳು ನೇರವಾಗಿ ನಡೆದು ಸ್ವರ್ಗಾರೋಹಣ ಮಾಡಿದ್ದಾರೆ ಎಂದು ನಾನು ಸಂಪೂರ್ಣವಾಗಿ ನಂಬಿದ್ದೇನೆ" ಎಂದರು.