“ನಮ್ಮ ದುರವಸ್ಥೆಯ ಬಗ್ಗೆ ಪತ್ರಿಕೆ ಬರೆದ ನಂತರ, ಯಾರಾದರೂ ನಿಜವಾಗಿಯೂ ನಮಗೆ ಸಹಾಯ ಮಾಡುತ್ತಾರೆಂದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಕೇವಲ ಮೂರು ದಿನಗಳ ನಂತರ, ನನಗೆ ಕರೆ ಮಾಡಿ ಬೆಂಬಲ ನೀಡುವುದಾಗಿ ಇಬ್ಬರು ಭರವಸೆ ನೀಡಿದ್ದಾರೆ. ”ಎಂದು ಹುಡುಗಿಯ ತಾಯಿ ಮೆಗ್ನಾಜ್ ಬೇಗಮ್ ಹೇಳಿದರು. ಫೋನ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಮಗಳ ಶೈಕ್ಷಣಿಕ ದಾಕಲೆ ಬಗೆಗೆ ಕೇಳಿದಾಗ ಶಾಲೆಗೆ ಹೋಗಲು ಸಿದ್ದವಾಗಿದ್ದ ತಮ್ಮ ಮಗಳೂ ಅಲ್ಸಿಯಾ ಅಂಜುಮ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. “ನಾನು ತಕ್ಷಣ ನಿಮ್ಮ ತಾಯಿಯ ಖಾತೆಗೆ 5,000 ರೂ. ಹಾಕುವೆ, ನೀವು ಈ ತಿಂಗಳ ಶುಲ್ಕವನ್ನು ಪಾವತಿಸಿ ಮತ್ತು ಅಧ್ಯಯನವನ್ನು ಮುಂದುವರಿಸಿ ”ಎಂದು ನಗರದ ಸಿಎ ಸಂಸ್ಥೆಯ ಮಾಲೀಕರಾದ ಜಿ ಎ ಸುಂದರ್ ಅವರು ಅರ್ಷಿಯಾಗೆ ತಿಳಿಸಿದರು. 5 ಸಾವಿರ ರು. ಮೊತ್ತವನ್ನು ಸಹ ಖಾತೆಗೆ ಜಮಾ ಮಾಡಲಾಗಿದೆ.