ದಿಟ್ಟ ನಿಲುವು ತೆಗೆದುಕೊಂಡಿರುವ ಎಸ್ಐಟಿ ವಂಚನೆಯಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿಗಳನ್ನು ಸಹ ಬಿಟ್ಟಿಲ್ಲ. ತನಿಖೆಯ ಸಮಯದಲ್ಲಿ ಈ ಅಧಿಕಾರಿಗಳು 2018 ರಲ್ಲಿ ಕರ್ನಾಟಕ ಸಂರಕ್ಷಣಾ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆಯಡಿ ಹಲವರು ಐಎಂಎ ವಿರುದ್ಧ ದೂರು ನೀಡಲು ಮುಂದಾದರೂ ಇವರುಗಳು ಕರಣಗಳನ್ನು ದಾಖಲಿಸಿಕೊಳ್ಲಲಿಲ್ಲಎಂಬ ಆರೋಪದ ಮೇಲೆ ನೋಟಿಸ್ ನೀಡಲಾಗಿದೆ ಅಧಿಕಾರಿಗಳ ಪ್ರಕಾರ, ಅಜಯ್ ಹಿಲೋರಿ ಮತ್ತು ಇತರ ಅಧಿಕಾರಿಗಳು ತಮ್ಮ ಮುಂದೆ ಬಂದ ದೂರುದಾರರ ಎಲಾ ಪ್ರಕರಣಗಳನ್ನು ‘ಇತ್ಯರ್ಥಪಡಿಸಿದ್ದರು’. ಐಎಂಎ ಕಾರ್ಯನಿರ್ವಹಿಸುತ್ತಿರುವ ವಿಧಾನದಲ್ಲಿ ಅವರು ಯಾವುದೇ ನ್ಯೂನತೆ ಪತ್ತೆ ಮಾಡಲಿಲ್ಲ, ಹಾಗಾಗಿ ಮುಂದೆ ಯಾವೊಬ್ಬ ದೂರುದಾರರೂ ಅವರ ಬಳಿ ದೂರು ನೀಡಲು ಮುಂದೆ ಬರಲಿಲ್ಲ.