ಈ ಪ್ರಕರಣದಲ್ಲಿ ಸೈಯದ್ ಫರೀದ್ ಅಹಮದ್, ಸೈಯದ್ ಅಫಾಕ್ ಅಹಮದ್, ಇರ್ಫಾನ್ ಮಿರ್ಜಾ, ವಿಜಯ್ ಟಾಟಾ, ರಮೇಶ್, ಇನಾಯತ್-ಉಲ್ಲಾ ವಾಹಬ್, ಗಾಲಿ ಜರ್ನಾದನ ರೆಡ್ಡಿ, ಆಲಿ ಖಾನ್ ಮತ್ತು ಆಶ್ರಫ್ ಆಲಿ ಎಂಬುವರು ಆರೋಪಿಗಳಾಗಿದ್ದು, ಈ ಪೈಕಿ ಫರೀದ್ ಅಹಮದ್ ಮತ್ತು ಸೈಯದ್ ಅಫಾಕ್ ಅಹಮದ್ ಅವರುಗಳು ನಿರೀಕ್ಷಣಾ ಜಾಮೀನನ್ನು ಪಡೆದಿದ್ದರೆ, ಇರ್ಫಾನ್ ಮಿರ್ಜಾ, ಬಳ್ಳಾರಿ ರಮೇಶ್, ಇನಾಯತ್-ಉಲ್ಲಾ , ಗಾಲಿ ಜರ್ನಾಧನ್ ರೆಡ್ಡಿ, ಅಲಿ ಖಾನ್ ಮತ್ತು ಅಶ್ರಫ್ ಅಲಿ ಅವರನ್ನು ತನಿಖೆಯ ಅವಧಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸದ್ಯ ಇವರೆಲ್ಲ ಹಾಲಿ ನ್ಯಾಯಾಲಯದ ಜಾಮೀನಿನ ಮೇಲೆ ಹೊರಬಂದಿದ್ದಾರೆ.