ನ್ಯಾಯಮೂರ್ತಿ ಅಶೋಕ ಜಿ. ನಿಜಗುಣನವರ್ ಅವರನ್ನೊಳಗೊಂಡ ಪೀಠ ಸೋಮವಾರ ಈ ಸಂಬಂಧ ವಿಚಾರಣೆ ನಡೆಸಿದೆ. ಚುನಾವಣೆ ವೆಚ್ಚಕ್ಕಾಗಿ 10 ಕೋಟಿ ರು. ಲಂಚ ನೀಡುವುದಾಗಿ ಆಮಿಷ ಒಡ್ಡಿದ್ದರೆನ್ನಲಾಗಿರುವ ಯಡಿಯೂರಪ್ಪ ಅವರ ಧ್ವನಿಯನ್ನೊಳಗೊಂಡ ಆಡಿಯೋ ಸಿಡಿ ಪ್ರಕರಣ ಇದಾಗಿದೆ. ಶರಣಗೌಡ ನಾಗನಗೌಡ ಕಂದಕೂರ ಎಂಬುವವರು ಈ ಸಂಬಂಧ ಸೂಕ್ತ ತನಿಖೆಗಾಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.