ತಂದೆ ಕಳೆದುಕೊಂಡ ದುಃಖದಲ್ಲಿಯೂ ಪರೀಕ್ಷೆ ಬರೆದ ಸಚಿವ ಸಿ.ಎಸ್. ಶಿವಳ್ಳಿ ಪುತ್ರಿ

ಸಚಿವ ಎಸ್.ಎಸ್.ಶಿವಳ್ಳಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಂದೆಯನ್ನು ಕಳೆದುಕೊಂಡ ದುಃಖದಲ್ಲಿಯೂ ಪರೀಕ್ಷೆ ಬರೆದಿದ್ದಾಳೆ...
ಶಿವಳ್ಳಿ ಪುತ್ರಿ ರೂಪಾ
ಶಿವಳ್ಳಿ ಪುತ್ರಿ ರೂಪಾ
ಹುಬ್ಬಳ್ಳಿ: ಸಚಿವ ಎಸ್.ಎಸ್.ಶಿವಳ್ಳಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಂದೆಯನ್ನು ಕಳೆದುಕೊಂಡ ದುಃಖದಲ್ಲಿಯೂ ಪರೀಕ್ಷೆ ಬರೆದಿದ್ದಾಳೆ.
ಗುರುವಾರದಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಶುರುವಾಗಿದ್ದು, ಶಿವಳ್ಳಿ ಪುತ್ರಿ ರೂಪಾ ಕೂಡ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿರುವ ಕೆಎಲ್‌ಇ ಸ್ಕೂಲ್‌ನಲ್ಲಿ ನಡೆಯುತ್ತಿರುವ ಪರೀಕ್ಷೆ ಗೆ ಹಾಜರಾಗಿದ್ದಾಳೆ.
ಪರೀಕ್ಷೆ ಬರೆದ ಬಳಿಕ, ಸ್ವಗ್ರಾಮದಲ್ಲಿ ನಡೆಯುವ ಅಂತ್ಯ ಸಂಸ್ಕಾರದಲ್ಲಿ ರೂಪಾ ಭಾಗಿಯಾಗಲಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿನ್ನೆ ತೀವ್ರ ಹೃದಾಘಾತದಿಂದ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ  ಅಕಾಲಿಕ ಮರಣಕ್ಕೀಡಾಗಿದ್ದರು. ಇಂದು ಸಂಜೆ ಅವರ ಹುಟ್ಟೂರಾದ ಯರಗುಪ್ಪಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಶಿವಳ್ಳಿ ಅವರ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಆಚರಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com