ಫೋಕಸ್ ಟಿ.ವಿಯ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಕಮ್ಮಾರ್ ಬಂಧಿತ ಆರೋಪಿ. ಸಿಸಿಬಿಯ ಡೆಪ್ಯುಟಿ ಕಮಿಷನರ್ ನೀಡಿರುವ ಮಾಹಿತಿಯ ಪ್ರಕಾರ ಅರವಿಂದ ಲಿಂಬಾವಳಿಯ ಸ್ನೇಹಿತ ಗಿರೀಶ್ ಭಾರಧ್ವಾಜ್ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. "ಹೇಮಂತ್ ಕಮ್ಮಾರ್ ಎಂಬ ವ್ಯಕ್ತಿ ನಿರಂತರವಾಗಿ ತನಗೆ ವಾಟ್ಸ್ ಆಪ್ ಕರೆ ಮಾಡುತ್ತಿದ್ದು, ಬಿಜೆಪಿ ನಾಯಕನ ಆಡಿಯೋ ಹಾಗೂ ಖಾಸಗಿ ವಿಡಿಯೋಗಳು ತನ್ನ ಬಳಿ ಇದೆ, ಇದನ್ನು ಪ್ರಸಾರ ಮಾಡದೇ ಇರುವುದಕ್ಕಾಗಿ ತನಗೆ 50 ಲಕ್ಷ ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದ" ಎಂದು ದೂರಿನಲ್ಲಿ ತಿಳಿಸಲಾಗಿದೆ.