ದೂರಿನಲ್ಲಿ ಅನುಪಮಾ ಶಣೈ ಅಸೀಫ್ ಹನೀಫ್ ಎಂಬಾತನನ್ನು ಆರೋಪಿಯನ್ನಾಗಿ ಸೂಚಿಸಿದ್ದಾರೆ. ಉಚ್ಚಿಲ ಭಾಸ್ಕರ ನಗರ ನಿವಾಸಿಯಾದ ಅಸೀಫ್ ಹನೀಫ್ ಹಾಗೂ ಇನ್ನಿಬ್ಬರು ಇಂಟರ್ ನೆಟ್ ಬಳಸಿ ನನ್ನ ಮೊಬೈಲ್ ಗೆ ಕರೆ ಮಾಡಿದ್ದು ಇಸ್ಲಾಂ ಹಾಗೂ ಬುರ್ಖಾ ವಿಚಾರದಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಷ್ಟಲ್ಲದ್ವೆ ನಮಗೆ ಹಣ ನೀಡಿ ಇಲ್ಲವೇ ನಿಮ್ಮನ್ನು ಕೊಂದುಹಾಕುತ್ತೇವೆ ಎಂದೂ ಬೆದರಿಕೆ ಹಾಕಿದ್ದಾರೆ ಎಂದು ಶಣೈ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.