ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ. ದೇಶದಲ್ಲಿ ಬಂಡವಾಳ ಹೂಡಿಕೆದಾರರ ಮನ ಗೆದ್ದು ಆರ್ಥಿಕ ಪ್ರಗತಿ ಸಾಧಿಸಲು ಮುಖ್ಯ ಕಾರಣವಾಗುವುದು ಉದ್ಯಮ ನಡೆಸಲು ಬೇಕಾದ ಪೂರಕ ಸುಲಭ ವಾತಾವರಣ. ಸ್ವಯಂ ದೃಢೀಕರಣ, ವಾರ್ಷಿಕ ಲೈಸೆನ್ಸ್ ನವೀಕರಣದ ಬದಲಿಗೆ 5 ವರ್ಷಗಳ ಲೈಸೆನ್ಸ್ ನವೀಕರಣ ಪರಿಕಲ್ಪನೆ ಉದ್ಯಮಕ್ಕೆ ಸಹಾಯವಾಗಲಿದೆ. ಉದ್ಯಮ ಸರಾಗವಾಗಿ ಮತ್ತು ವೇಗವಾಗಿ ಸಾಗಲು ನೀತಿ ನಿರೂಪಣೆ ಸರಿಯಾಗಿರಬೇಕು ಎಂದು ಕಿರಣ್ ಮಜುಂದಾರ್ ಶಾ ಹೇಳುತ್ತಾರೆ.