ಬೋರಗಾಂವ: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಎಷ್ಟರ ಮಟ್ಟಿಗೆ ಇದೆ ಅಂದರೆ ಶಿಕ್ಷಕ ವರ್ಗಾವಣೆ ಆದ ನಂತರ ವಿದ್ಯಾರ್ಥಿಗಳು ಗಳಗಳನೇ ಅತ್ತ ಘಟನೆ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ನಡೆದಿದೆ.
ಬೋರಗಾಂವ ಪಟ್ಟಣದ ಸರಕಾರಿ ಮರಾಠಿ ಶಾಲೆಯ ಶಿಕ್ಷಕ ರಮೇಶ ಮಠಪತಿ ಅವರು ದೈಹಿಕ ಶಿಕ್ಷಕನಾಗಿ ಕಳೆದ ಐದು ವರ್ಷಗಳಿಂದ ಇದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಆದರೆ ಶಿಕ್ಷಕ ಮಠಪತಿ ಅವರನ್ನು ವಿಜಪುರದ ಮುದ್ದೇಬಿಹಾಳಕ್ಕೆ ವರ್ಗಾವಣೆ ಮಾಡಿದ ಹಿನ್ನೆಲೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ನೆನೆದು ಗಳಗಳನೇ ಅತ್ತಿದ್ದಾರೆ. ಇನ್ನೂ ಶಿಕ್ಷಕ ವರ್ಗಾವಣೆ ಆದ ಹಿನ್ನೆಲೆ ನಂತರ ಶಿಕ್ಷಕನ ಕಾಲಿಗೆ ಬಿದ್ದು ನಂತರ ಬೀಳ್ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಕಣ್ಣೀರಿನಿಂದ ನೆರೆದಿದ್ದ ಶಿಕ್ಷಕರು ಕಣ್ಣೀರು ಹಾಕಿದರು.
Advertisement