ಶಾಸಕ ತನ್ವೀರ್ ಸೇಠ್‌ಗೆ ಚೂರಿ ಇರಿತ: ವಿಐಪಿಯನ್ನು ಕೊಂದು ಫೇಮಸ್ ಆಗ್ತೀನಿ: ಸ್ನೇಹಿತರ ಬಳಿ ಹೇಳಿಕೊಂಡಿದ್ದ ಫರಾನ್

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಚೂರಿ ಇರಿದಿದ್ದ ಆರೋಪಿ ಫರಾನ್ ಗೆ ದಿಢೀರ್ ಅಂತಾ ಫೇಮಸ್ ಆಗಬೇಕು ಎಂಬ ಹುಚ್ಚಿನಲ್ಲಿ ಈ ರೀತಿ ಮಾಡಿದ್ದಾನೆ ಎಂಬ ಸ್ಫೋಟಕ ವಿಚಾರ ಇದೀಗ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ತನ್ವೀರ್ ಸೇಠ್-ಫರಾನ್
ತನ್ವೀರ್ ಸೇಠ್-ಫರಾನ್

ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಚೂರಿ ಇರಿದಿದ್ದ ಆರೋಪಿ ಫರಾನ್ ಗೆ ದಿಢೀರ್ ಅಂತಾ ಫೇಮಸ್ ಆಗಬೇಕು ಎಂಬ ಹುಚ್ಚಿನಲ್ಲಿ ಈ ರೀತಿ ಮಾಡಿದ್ದಾನೆ ಎಂಬ ಸ್ಫೋಟಕ ವಿಚಾರ ಇದೀಗ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. 

ಕಳೆದ ಭಾನುವಾರ ಮದುವೆ ಸಮಾರಂಭವೊಂದಕ್ಕೆ ತನ್ವೀರ್ ಸೇಠ್ ಹೋಗಿದ್ದರು. ಅಲ್ಲಿ ಫರಾನ್ ತನ್ವೀರ್ ಅವರಿಂದ ಆಶೀರ್ವಾದ ಪಡೆಯುವ ನೆಪದಲ್ಲಿ ಹತ್ತಿರಕ್ಕೆ ಹೋಗಿ ಚೂರಿಯಿಂದ ಕುತ್ತಿಗೆಗೆ ಚುಚ್ಚಿದ್ದ. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಯ ಸ್ನೇಹಿತರನ್ನು ಕರೆದು ವಿಚಾರಿಸಿದಾಗ ಆತ ಎಲ್ಲರ ಬಳಿ ತಾನು ಗಣ್ಯ ವ್ಯಕ್ತಿಯನ್ನು ಕೊಲೆ ಮಾಡಿ ಫೇಮಸ್ ಆಗುವುದಾಗಿ ಹೇಳಿಕೊಳ್ಳುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ. 

ವಿಚಾರಣೆ ವೇಳೆ ಫರಾನ್ ಸ್ನೇಹಿತರು ಆತ ನಮ್ಮ ಬಳಿ ಫೇಮಸ್ ಆಗುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ನಾವು ತಮಾಷೆಗೆ ಹೇಳುತ್ತಿದ್ದಾನೆ ಅಂದುಕೊಂಡಿದ್ದೇವು. ಆದರೆ ಭಾನುವಾರ ಶಾಸಕರ ಮೇಲೆ ಹಲ್ಲೆ ಮಾಡಿದ್ದನ್ನು ಕಂಡ ನಮಗೆ ಭಯವಾಯಿತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com