ಗಂಗಾವತಿಯಲ್ಲಿ ರೈಲಿಗೆ ಮೊದಲ ಬಲಿ: ಗುಜರಾತ್ ಮೂಲದ ಯುವಕ ಸಾವು

ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಸಂಗೀತಾ ಆಲಿಸುತ್ತಾ ಬರುತ್ತಿದ್ದ ಯುವಕನೊಬ್ಬ ಆಯಾತಪ್ಪಿ ರೈಲು ಹಳಿಗೆ ಬಿದ್ದು ಸಾವನ್ನಪ್ಪಿದ್ ಘಟನೆ ನಗರದಲ್ಲಿ ನಡೆದಿದೆ.
ಗಂಗಾವತಿಯಲ್ಲಿ ರೈಲಿಗೆ ಮೊದಲ ಬಲಿ: ಗುಜರಾತ್ ಮೂಲದ ಯುವಕ ಸಾವು
ಗಂಗಾವತಿಯಲ್ಲಿ ರೈಲಿಗೆ ಮೊದಲ ಬಲಿ: ಗುಜರಾತ್ ಮೂಲದ ಯುವಕ ಸಾವು

ಗಂಗಾವತಿ: ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಸಂಗೀತ ಆಲಿಸುತ್ತಾ ಬರುತ್ತಿದ್ದ ಯುವಕನೊಬ್ಬ ಆಯಾತಪ್ಪಿ ರೈಲು ಹಳಿಗೆ ಬಿದ್ದು ಸಾವನ್ನಪ್ಪಿದ್ ಘಟನೆ ನಗರದಲ್ಲಿ ನಡೆದಿದೆ. ಮೃತನನ್ನು ಗುಜರಾತ್ ರಾಜ್ಯದ ನಂದೆಲಾ ಜಿಲ್ಲೆಯ ದಾವತ್ ಎಂಬ ಗ್ರಾಮದ ವಿಫುಲ್ ತಂದೆ ಭರತ್ (18) ಎಂದು ಗುರುತಿಸಲಾಗಿದೆ. 

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಕೆಲಸಕ್ಕೆಂದು ಗುಜರಾತಿನ ಹಲವು ಯುವಕರೊಂದಿಗೆ ಬಂದಿದ್ದ ಈ ಯುವಕ, ಬುಧವಾರ ಸಂಜೆ ನಗರದ ಕೊಪ್ಪಳ ರಸ್ತೆಯಲ್ಲಿರುವ ಹಳಿಯನ್ನು ದಾಟಿ ಬಹದರ್ೆಸೆಗೆ ಹೋಗಿದ್ದಾನೆ. ನಿಸರ್ಗದ ಕರೆ ಮುಗಿಸಿ ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಹಳಿ ದಾಟುತ್ತಿರುವಾಗ ಆಕಸ್ಮಿಕ ಆಗಮಿಸಿದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ರೈಲು ಗಂಗಾವತಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  

ಗಂಗಾವತಿಯಲ್ಲಿ ರೈಲು ಸೇವೆ ಆರಂಭವಾಗಿ ಒಂಭತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ರೈಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com