ಕೊಡುವುದಾದರೇ ಭಗತ್ ಸಿಂಗ್ ಗೆ ಭಾರತ ರತ್ನ ನೀಡಲಿ: ಕೃಷ್ಣ ಬೈರೇಗೌಡ

ಭಾರತ ರತ್ನ ಕೊಡುವುದಾದರೆ ಭಗತ್ ಸಿಂಗ್ ಅವರಿಗೆ ಕೊಡಲಿ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ,  ಹೇಳಿದ್ದಾರೆ. 
ಭಗತ್ ಸಿಂಗ್
ಭಗತ್ ಸಿಂಗ್

ಕೋಲಾರ: ಭಾರತ ರತ್ನ ಕೊಡುವುದಾದರೆ ಭಗತ್ ಸಿಂಗ್ ಅವರಿಗೆ ಕೊಡಲಿ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ,  ಹೇಳಿದ್ದಾರೆ. 

ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಕೋಲಾರದ ನರಸಾಪುರದಲ್ಲಿ ಮಾತನಾಡಿದ  ಭಗತ್ ಸಿಂಗ್ ಅವ್ರಿಗೆ ಭಾರತರತ್ನ ಕೊಡಬಹುದಿತ್ತು. ಆದ್ರೆ ಬ್ರಿಟೀಷರ ಜೊತೆ ಅಡ್ಜೆಸ್ಟ್ ಮೆಂಟ್ ಆದ ಸಾವರ್ಕರ್‌ಗೆ ಕೊಡಲು ಹೊರಟಿದ್ದಾರೆ. 

ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತ ರತ್ನ ಕೊಡೋದ್ರಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ತಿದೆ. ಕೊಡೋದಿದ್ರೆ ಭಗತ್ ಸಿಂಗ್, ಸಿದ್ದಗಂಗಾ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಲಿ ಎಂದು ಹೇಳಿದ್ದಾರೆ.

ಅಲ್ಲದೇ, ಯಡಿಯೂರಪ್ಪ, ಕುಮಾರಸ್ವಾಮಿ ಆಡಳಿತಕ್ಕಿಂತ , ಸಿದ್ದರಾಮಯ್ಯ ಅವ್ರ ಆಡಳಿತ ಉತ್ತಮವಾಗಿತ್ತು. ಜನರ ಆಶೀರ್ವಾದ ಇದ್ದರೆ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com