ಬೀದರ್: ತಬ್ಲೀಘಿ ಜಮಾತ್ ನಲ್ಲಿ ಭಾಗಿ, ವೀಸಾ ನಿಯಮ ಉಲ್ಲಂಘಿಸಿದ ಕಿರ್ಗಿಸ್ತಾನದ 8 ಮಂದಿ ವಿರುದ್ದ ಪ್ರಕರಣ, ಕ್ವಾರಂಟೈನ್!

ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನದ 8 ಮಂದಿ ವಿರುದ್ದ ವೀಸಾ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ತಬ್ಲೀಘಿ ಜಮಾತ್
ತಬ್ಲೀಘಿ ಜಮಾತ್

ಬೀದರ್: ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನದ 8 ಮಂದಿ ವಿರುದ್ದ ವೀಸಾ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ. 

ಪ್ರವಾಸಿ ವೀಸಾ ಪಡೆದು ಬೀದರ್ ಗೆ ಬಂದಿದ್ದ ಕಿರ್ಗಿಸ್ತಾನದ 8 ಮಂದಿ ವಿರುದ್ಧ 1946ರ ವಿದೇಶಿ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಧಿಕಾರಿ ನಾಗೇಶ್ ಬಿಎಲ್ ಹೇಳಿದ್ದಾರೆ.

ಈ ಎಂಟು ಮಂದಿ ವಿದೇಶಿಗರು ಮಾರ್ಚ್ ನಲ್ಲಿ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಂತರ ಬೀದರ್ ಗೆ ಬಂದಿದ್ದರು. 

ಇವರನ್ನು ಬೀದರ್ ನ ರತ್ಕಲ್ಪುರ್ ಮಾರ್ಕಜ್ ಹೋಮ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com