ಬೀದರ್: ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನದ 8 ಮಂದಿ ವಿರುದ್ದ ವೀಸಾ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಪ್ರವಾಸಿ ವೀಸಾ ಪಡೆದು ಬೀದರ್ ಗೆ ಬಂದಿದ್ದ ಕಿರ್ಗಿಸ್ತಾನದ 8 ಮಂದಿ ವಿರುದ್ಧ 1946ರ ವಿದೇಶಿ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಧಿಕಾರಿ ನಾಗೇಶ್ ಬಿಎಲ್ ಹೇಳಿದ್ದಾರೆ.
ಈ ಎಂಟು ಮಂದಿ ವಿದೇಶಿಗರು ಮಾರ್ಚ್ ನಲ್ಲಿ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಂತರ ಬೀದರ್ ಗೆ ಬಂದಿದ್ದರು.
ಇವರನ್ನು ಬೀದರ್ ನ ರತ್ಕಲ್ಪುರ್ ಮಾರ್ಕಜ್ ಹೋಮ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
Advertisement