ಚಾಮರಾಜನಗರ: ಕೋವಿದ್ ಭೀತಿಯಲ್ಲೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ಕಾರಿ ನೌಕರರ ಸಂಘ

ಸಾಮಾಜಿಕ ಪಿಡುಗಾಗಿರುವ ಕೊರೊನಾ ವೈರಸ್‌ನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೆ ಲಾಕ್‌ಡೌನ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಈ ಅವಧಿಯಲ್ಲಿ ಸಾಕಷ್ಟು ನಡೆಯದಿದ್ದರಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕಕ್ಕೆ ಬಡ ರೋಗಿಗಳಿಗೆ ಬೇಕಾದ ರಕ್ತದ ಕೊರತೆ ಎದುರಾಗಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಾಮರಾಜನಗರ : ಸಾಮಾಜಿಕ ಪಿಡುಗಾಗಿರುವ ಕೊರೊನಾ ವೈರಸ್‌ನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೆ ಲಾಕ್‌ಡೌನ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಈ ಅವಧಿಯಲ್ಲಿ ಸಾಕಷ್ಟು ನಡೆಯದಿದ್ದರಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕಕ್ಕೆ ಬಡ ರೋಗಿಗಳಿಗೆ ಬೇಕಾದ ರಕ್ತದ ಕೊರತೆ ಎದುರಾಗಿತ್ತು. ಇದರಿಂದ ಹೆರಿಗೆ ಮಾಡಿಸಿಕೊಳ್ಳುವ ಗರ್ಭಿಣಿಯರು, ರಕ್ತಹೀನತೆಯುಳ್ಳ ರೋಗಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರು. 

ಸಮಸ್ಯೆಯನ್ನರಿತ ಜಿಲ್ಲಾ ರಕ್ತನಿಧಿ ಘಟಕವು ರಕ್ತದಾನಕ್ಕಾಗಿ ಸ್ವಯಂ ಸೇವಾ ಸೇವಾ ಸಂಸ್ಥೆಗಳನ್ನು ಆಹ್ವಾನಿಸಿತ್ತು. ಈ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ 30 ಮಂದಿ ಸ್ವಯಂಸೇವಾ ಸದಸ್ಯರು ಸ್ವಪ್ರೇರಣೆಯಿಂದ ಅರೋಗ್ಯ ತಪಾಸಣೆ ಮಾಡಿಸಿಕೊಂಡು, ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. 

ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಜಿಲ್ಲಾ ರಕ್ತನಿಧಿ ಘಟಕದ ಮನವಿಯ ಮೇರೆಗೆ ಬಡರೋಗಿಗಳಿಗೆ ನೆರವಾಗುವ ಸಲುವಾಗಿ ನಮ್ಮ ಸಂಘದ 30 ಮಂದಿ ಸದಸ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ, ರೋಗಿಗಳ ಜೀವ ಉಳಿಸುವಲ್ಲಿ ನೆರವಗಿದ್ದಾರೆ ಎಂದು ಶ್ಲಾಘಿಸಿದರು.

ಚಾಮರಾಜನಗರ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಸುಜಾತಾ ಮಾತನಾಡಿ ಕೊರೊನಾ ವೈರಸ್‌ನ ಭೀತಿಯಿಂದ ಜಿಲ್ಲಾ ರಕ್ತನಿಧಿ ಘಟಕಕ್ಕೆ ರಕ್ತದ ಕೊರತೆ ಎದುರಾಗಿತ್ತು. ಈ ಸಂದರ್ಭದಲ್ಲಿ ನಾವು ಸಂಘಸಂಸ್ಥೆಗಳನ್ನು ಮನವಿ ಮಾಡಿಕೊಂಡಾಗ ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ 30 ಮಂದಿ ಸ್ವಯಂಸೇವಾ ಸದಸ್ಯರು ಸ್ವಪ್ರೇರಣೆಯಿಂದ ಅರೋಗ್ಯ ತಪಾಸಣೆ ಮಾಡಿಸಿಕೊಂಡು, ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಜಿಲ್ಲಾ ಆಶ್ರಿತ ವೈದ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಮಾತನಾಡಿ ರಕ್ತನಿಧಿ ಘಟಕಗಳಿಗೆ ರಕ್ತದ ಅವಶ್ಯಕತೆ ಇರುವವರಿಗೆ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದು ತಕ್ಷಣ ನೆರವಾಗಬೇಕೆಂದು ಮನವಿ ಮಾಡಿದರು.

ರಕ್ತದಾನಿ ಸಂದೀಪ್ ಮಾತನಾಡಿ ಸಂಘದ ಮನವಿಯ ಮೇರೆಗೆ ಬಡರೋಗಿಗಳಿಗೆ ನೆರವಾಗುವ ಸಲುವಾಗಿ 0+ ಬ್ಲಡ್ ನೀಡಿದ್ದೇನೆ. ಇದರಿಂದ ನನಗೆ ಖುಷಿಯಾಗಿದೆ ಎಂದರು.
ಮತ್ತೋರ್ವ ರಕ್ತದಾನಿ ರಕ್ಷಿತ್‌ಕುಮಾರ್ ಮಾತನಾಡಿ ಸಂಘದ ಮನವಿಯ ಮೇರೆಗೆ ತಾವು ಕೂಡ 0+ ಬ್ಲಡ್ ದಾನಮಾಡಿದ್ದೇನೆ. ನನ್ನಂತೆಯೇ ಇತರದಾನಿಗಳೂ ಕೂಡ ಜೀವ ಉಳಿಸಲು ರಕ್ತದ ಅವಶ್ಯಕತೆಯಿರುವವರಿಗೆ ನೆರವಾಗಬೇಕೆಂದು ಮನವಿ ಮಾಡಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com