ವಿಜಯಪುರ: ಭೀಮಾತೀರದ ಮಹದೇವ ಬೈರಗೊಂಡ ಸಾಹುಕಾರ್ ಮೇಲೆ ನಡೆದಿದ್ದ ಫೈರಿಂಗ್ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರದ ಇಂಡಿ ಪೋಲೀಸರು ಇಂದು ಬಂಧಿಸಿದ್ದಾರೆ.
ಬಂಧಿತನನ್ನು ಮಡಿವಾಳಯ್ಯ ಪಂಚಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಅಲ್ಲದೆ ಈತನೇ ಇಡೀ ಘಟನೆಯ ಸೂತ್ರಧಾರಿ ಎನ್ನಲಾಗಿದೆ.
ಪ್ರಕರಣದ ಸಂಬಂಧ ಇದುವರೆಗೆ ಒಟ್ಟೂ 30 ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ನವೆಂಬರ್ 2ರಂದು ನಡೆದ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಬೈರಗೊಂಡ ಗಾಯಗೊಂಡಿದ್ದರು.
Advertisement