ಬೆಂಗಳೂರು: ಬಹು ಚರ್ಚಿತ ಎಪಿಎಂಸಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ.
ಬಹುಹೊತ್ತಿನ ತನಕ ನಡೆದ ಚರ್ಚೆ ನಂತರ ಪ್ರತಿಪಕ್ಷಗಳ ವಿರೋಧದ ನಡುವೆ ಮಸೂದೆ ಅಂಗೀಕಾರ ಪಡೆಯಿತು.
ಸದನದಲ್ಲಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಸೂದೆ ಗೆ ತೀವ್ರ ಪ್ರತಿರೋಧ ತೋರಿ :ಕಾಯ್ದೆ ಜರಿಗೆ ತಂದರೆ ರೈತರ ಶಾಪ ತಟ್ಟದೆ ಇರದು, ಶಾಪ ತಟ್ಟಿದರೆ ಸರ್ಕಾರ ಉದ್ದಾರ ಆಗಲ್ಲ" ಎಂದರು. ಅಲ್ಲದೆ :ರೈತರನ್ನು ಕೊಲ್ಲುವ ಪ್ರಯತ್ನ ಬೇಡ: ಎಂದು ಹೇಳಿದ್ದಾರೆ,
ಇದಕ್ಕೆ ಉತ್ತರಿಸಿದ್ದ ಸಚಿವ ಎಸ್.ಟಿ.ಸೋಮಶೇಖರ್ "ಎಪಿಎಂಸಿ ಮುಚ್ಚುವುದಿಲ್ಲ. ಅಧಿಕಾರ ಕಡಿತವೂ ಆಗಲ್ಲ,. ಆದರೆ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಮಸೂದೆಗೆ ವಿರೋಧ ವ್ಯಕ್ತ ಮಾಡುತ್ತಿದೆ : ಎಂದರು. ಸೋಮಶೇಖರ್ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದಾರೆ.
ಮಸೂದೆ ಅಂಗೀಕಾರ ಪ್ರಕ್ರಿಯೆ ನಂತರ ರಿಷತ್ ಕಲಾಪ ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸೂಚನೆ ನೀಡಿದ್ದಾರೆ.
Advertisement